ಬಂತಾವ್ವಾ ಬಂತಾವ್ವಾ ಬಂತವ್ವಾ ಶ್ರಾವಣಾ

ಬಂತಾವ್ವಾ ಬಂತಾವ್ವಾ ಬಂತವ್ವಾ ಶ್ರಾವಣಾ
ಚಂದೇನ ಚಾರೇನ ಸಾಮೇರ ಚರಣಾ ||ಪಲ್ಲ||

ಮಠತುಂಬ ರಂಗೋಲಿ ಮುತೈದಿ ಬಾಲೇರು
ಪಡಿಹಿಗ್ಗು ಪಂಚಮಿ ಮಾಡ್ಯಾರೆ
ತೋರಮುತ್ತಿನ ಕಾಂತಿ ಮುತ್ತು ಮಾಣಿಕ ದಾಂತಿ
ಕಾಶೀಯ ಪೀತಾಂಬ್ರ ಉಟ್ಟಾರೆ ||೧||

ಪರಪಂಚ ಪಂಚೇತಿ ಫಜೀತಿ ಪುರಮಾಶಿ
ಕೀರ್ತನಾ ಕೇಳಾಗ ಹೋಗೇತೆ
ಉಟಸೀರಿ ಜಾರೇತೆ ಮುಡಿಸೆರಗು ಹಾರೇತೆ
ಗರತೇರ ಮಾನಾ ಮಾರೇತೆ ||೨||

ಸಾಮೇರ ಮಂಚಕ್ಕ ಪಂಚರಂಭೇರೇರಿ
ಹಣ್ಗಾಯಿ ನೀರ್‍ಗಾಯಿ ಆಗ್ಯಾರೆ
ಸಾಮೇರ ತೊಡಿಮ್ಯಾಗ ಆರೂರ ಹುಡಿಗೇರು
ಬಕಬಾರ್‍ಲೆ ಕಣ್ತಿರಿಗಿ ಬಿದ್ದಾರೆ ||೩||

ಗುರುಗೋಳು ಬಂದಾರೆ ಗುರುವಣ್ಣಿ ಕೂಡ್ಯಾರೆ
ಮಠದಾಗ ಹೆಂಡಿರ ಮಾಡ್ಯಾರೆ
ಹೋದೋರು ಆರ್‍ಮಂದಿ ಬಂದೋರು ಮೂರ್‍ಮಂದಿ
ಊರ್‍ಮಂದಿ ಹುಡಿಗೇರು ಬಸರಾಗೆ ||೪||

ಗೋಡಿ ಬುದಬುದು ಬಿದ್ದು ಪೀಠ ಫಡಫಡ ಎದ್ದು
ಸಾಮೇರು ಕಾಮೇರು ಆಗ್ಯಾರೆ
ನವಿಲೀನ ನಾರೇರ ಕದ್ದಾರೆ ಮೆದ್ದಾರೆ
ಮುಗಿಲೀನ ತೊಟ್ಟಿಲಾ ತೂಗ್ಯಾರೆ ||೫||
*****
ಶ್ರಾವಣ=ಆತ್ಮಿಕ ಶ್ರವಣಾ; ಸ್ವಾಮೇರು = ಭಗವಂತ; ಮಠ = ಬ್ರಹ್ಮ ತತ್ವ; ಬಾಲೇರು-ಹುಡಿಗೇರು-ಗರತೇರು-ಗುರುವಣ್ಣಿ-ಹೆಂಡಿರು = ಸರ್ವ ಆತ್ಮರು; ಪಂಚಮಿ=ಪಂಚೇಂದ್ರಿಯಗಳ ಕೂಟ; ಉಟಸೀರಿ= ದೇಹಾಭಿಮಾನ (Physical Consciousness); ಆರ್‍ಮಂದಿ = ಷಡ್ವೈರಿಗಳು; ಮೂರ್‍ಮಂದಿ=ಸತ್, ಚಿತ್, ಆನಂದ; ಬಸರಾಗು=ಆತ್ಮ ಜ್ಞಾನಿಯಾಗು; ಕಾಮೇರು = ಕಾರುಣ್ಯದ ಮೇರು; ಮುಗಿಲಿನ ತೊಟ್ಟಿಲು = ಅಶರೀರ ಸ್ಥಿತಿ (Supra-mental plane).

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾಕೆ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೬೧

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys